‘ಚಿಣ್ಣರ ಜಾತ್ರೆ’ ಹಾಗೂ ‘ಹುಲ್ಕುತ್ರಿ ಸಂಸ್ಕೃತಿ’ ಪುಸ್ತಕ ಬಿಡುಗಡೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಲನ ಕಾರ್ಯಕ್ರಮ 2018-19
ದಿನಾಂಕ 18-02-2019 ರಂದು ನಮ್ಮ ಶಾಲೆಯಲ್ಲಿ 5ನೇ ವರ್ಷದ ಮೆಟ್ರಿಕ್ ಸಂತೆಯನ್ನು ‘ಚಿಣ್ಣರ ಜಾತ್ರೆ’ ಕಾರ್ಯಕ್ರಮದ ರೂಪದಲ್ಲಿ ಪರಿಚಯಿಸಲು ಅಲ್ಲದೇ ನಮ್ಮ ಶಾಲೆಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತರವರು ಹುಲ್ಕುತ್ರಿಯಲ್ಲೇ 15 ವರ್ಷ ಸೇವೆ ಸಲ್ಲಿಸಿದ ಪ್ರಯುಕ್ತ ಹುಲ್ಕುತ್ರಿಯಲ್ಲಿ ನಡೆಯಲಾದ 150 ವರ್ಷದ ಇತಿಹಾಸವನ್ನು ದಾಖಲಿಸಿರುವ ‘ಹುಲ್ಕುತ್ರಿ ಸಂಸ್ಕೃತಿ’ ಕೃತಿಯ ಬಿಡುಗಡೆ ಹಾಗೂ ಅದೇ ದಿನ ಸಂಜೆ ‘ಶಾಲಾ ವಾರ್ಷಿಕೋತ್ಸವ 2018-19’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗಿನ ‘ಚಿಣ್ಣರ ಜಾತ್ರೆ’ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಸದಸ್ಯರಾದ ಮಾನ್ಯ ಶ್ರೀ ನಾಗರಾಜ ನಾಯ್ಕ, ಬೇಡ್ಕಣಿ ಉದ್ಘಾಟಿಸಿದರು. ಹಾಗೂ ಈ ಶಾಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ದರ್ಶನ ಹರಿಕಾಂತರವರ ಚೊಚ್ಚಲ ಶೋಧನಾ ಕೃತಿಯಾದ ‘ಹುಲ್ಕುತ್ರಿ ಸಂಸ್ಕೃತಿ’ ಬಿಡುಗೊಡೆಗೊಳಿಸಿ, ‘ಮಕ್ಕಳಲ್ಲಿ ನೈತಿಕ, ಸಾಮಾಜಿಕ ಹಾಗೂ ಮಾನವೀಯ ಮೌಲ್ಯ ಬೆಳಸಬೇಕೆಂದರು.
ಚಂದ್ರಕಲಾ ವಿ. ಭಟ್ ಯಲ್ಲಾಪುರ ಇವರು ‘ಹುಲ್ಕುತ್ರಿ ಸಂಸ್ಕೃತಿ’ ಕೃತಿಯ ಪರಿಚಯ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಈ ಶಾಲೆಯಿಂದ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯವರಾದ ಶ್ರೀ ಕನ್ನಾ ದ್ವಾವ ಗೌಡ, ಹೆಮಜೆನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸುಶೀಲಾ ವೆಂಕಟೇಶ ಗೌಡ, ಸದಸ್ಯರು ಗ್ರಾ.ಪಂ. ಸೋವಿನಕೊಪ್ಪ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಚಂದ್ರಶೇಖರ ಮಾಬ್ಲ ಗೌಡ, ಉಪಾಧ್ಯಕ್ಷರಾದ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಹೆಮ್ಮನಬೈಲ್ ಲಕ್ಷ್ಮೀನಾರಾಯಣ ದೇವಸ್ಥಾನದ ಮೊಕ್ತೇಸರರಾದ ಶ್ರೀ ಗಜಾನನ ಮಟ್ಟೇರಮನೆ, ಪ್ರಾ.ಶಾ.ಶಿ. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಸತೀಶ ಹೆಗಡೆ, ಮಾಜಿ ಗ್ರಾ.ಪಂ. ಸದಸ್ಯರಾದ ಶ್ರೀ ದಿವಾಕರ ನಾಯ್ಕ, ಚಂದ್ರಕಲಾ ವಿ. ಭಟ್ ಯಲ್ಲಾಪುರ, ಪದೋನ್ನತ ಮುಖ್ಯೋಪಾಧ್ಯಾಯರಾದ ಶ್ರೀ ರಾಯಪ್ಪ ಶಿರನಾಳ ಕಿಲವಳ್ಳಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ಪದ್ಮನಾಭ ಗೌಡ, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ದರ್ಶನ ಹರಿಕಾಂತ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ : ದರ್ಶನ ಹರಿಕಾಂತ ಸ್ವಾಗತಿಸಿದರು, ಕು. ಮೈತ್ರಿ ಹೆಗಡೆ, ಕು. ಶ್ಯಾಮಲಾ ನಾಯ್ಕ ಹಾಗೂ ಕು. ಅನ್ನಪೂರ್ಣ ಕೆ. ಗೌಡ ಇವರು ನಿರ್ವಹಿಸಿದರು.
ವಾರ್ಷಿಕ ಸ್ನೇಹ ಸಮ್ಮೇಳನ : ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ತಾ.ಪಂ. ಸದಸ್ಯರಾದ ಶ್ರೀಮತಿ ಗಿರಿಜಾ ಕಲ್ಲೇಶ ಗೌಡ ಇವರು ಉದ್ಘಾಟಿಸಿದರು. ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಗೌಡ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ರಾಧಾ ವೆಂಕಟ್ರಮಣ ಗೌಡ, ಜಗದೀಶ ಪದ್ಮನಾಭ ಗೌಡ ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದರ್ಶನ ಹರಿಕಾಂತ ಸ್ವಾಗತಿಸಿದರು, ಕು. ಮೈತ್ರಿ ಹೆಗಡೆ, ಕು. ಶ್ಯಾಮಲಾ ನಾಯ್ಕ ಹಾಗೂ ಕು. ಅನ್ನಪೂರ್ಣ ಕೆ. ಗೌಡ ಇವರು ನಿರ್ವಹಿಸಿದರು.