2021-22ನೇ ಸಾಲಿನ ರಂಗೋಲಿಯಲ್ಲಿ ಸಮಾಜ ವಿಜ್ಞಾನದ ಚಿತ್ರಗಳು

2021-22 ನೇ ಸಾಲಿನ ರಂಗೋಲಿಯಲ್ಲಿ ಸಮಾಜದ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮವು ದಿನಾಂಕ 09-02-2022, ಬುಧವಾರದಂದು ನಡೆಯಿತು. ಸಮಾಜ ವಿಜ್ಞಾನದ ಶಿಕ್ಷಕರಾದ ಕು. ರಂಜನಾ ಭಂಡಾರಿ ಹಾಗೂ ದರ್ಶನ ಹರಿಕಾಂತ ಅವರ ಮಾರ್ಗದರ್ಶನದಲ್ಲಿ 4 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕರ್ನಾಟಕದ ವಿಭಾಗಗಳು, ಕೃಷ್ಣದೇವರಾಯನ ಕಾಲದ ವಿಜಯನಗರ ಸಾಮ್ರಾಜ್ಯ, ಕೆಂಪು ಕೋಟೆ, ವಿಭಾಗವಾರು ಕರ್ನಾಕಟ ರಾಜ್ಯದ ಭೂಪಟ, ರಾಷ್ಟ್ರಧ್ವಜ, ಆಸ್ಟ್ರೇಲಿಯ ಹೀಗೆ ವಿವಿಧ ಚಿತ್ರಗಳನ್ನು ವಿದ್ಯಾರ್ಥಿಗಳು ಚಿತ್ರಿಸಿ ಪ್ರದರ್ಶಿಸಿದರು.

ಶಾಲಾ ಶಿಕ್ಷಕಿಯರಾದ ಕು. ಮೈತ್ರಿ ಹೆಗಡೆ ಹಾಗೂ ಕು. ರಂಜನಾ ಭಂಡಾರಿ ಇವರು ಮಕ್ಕಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು.