ಹನಿಗೂಡಿದರೆ . . . . . – ಪಾಠ – 6

ಭೂಮಿಯ ಮೂರು ಭಾಗವೆಲ್ಲ ನೀರು ತುಂಬಿದೆ,
ಸೂರ್ಯಶಾಖದಿಂದ ಕಾದು ಆವಿಯಾಗಿದೆ;
ಆವಿ ಮೇಲೆ ಏರಿ ಮುಗಿಲ ಎಡೆಗೆ ಸಾಗಿದೆ,
ತಂಪು ಗಾಳಿ ತಗುಲಿ ಆವಿ ಹನಿಗಳಾಗಿದೆ;
ಹನಿಗಳೆಲ್ಲ ಒಂದುಗೂಡಿ ಮೋಡವಾಗಿದೆ,
ಮೋಡವೆಲ್ಲ ಗಗನದಲ್ಲಿ ತೇಲತೊಡಗಿದೆ;
ಮೋಡದ ಹನಿಗಳೆಲ್ಲಾ ಸೇರಿ ದೊಡ್ಡದಾಗಿವೆ,
ಹನಿಗಳೆಲ್ಲ ಧರೆಗೆ ಇಳಿದು ಮಳೆಯ ಸುರಿಸಿವೆ;
ಮಳೆಯ ನೀರು ಹರಿದು ಹಳ್ಳಕೊಳ್ಳ ಸೇರಿದೆ,
ಇದರ ನೀರು ಮತ್ತೆ ಕಾದು ಆವಿಯಾಗಿದೆ.

ಈ ಹಾಡು ಹೇಳುತ್ತಾ ಮುಂದಿನ ಚಿತ್ರ ಗಮನಿಸು.

ಓದಿ-ತಿಳಿ
ನೀರು ಒಂದು ದ್ರವ. ಇದು ಕಾದಾಗ ಆವಿಯಾಗುತ್ತದೆ. ಇದು ನೀರಿನ ಅನಿಲ ಸ್ಥಿತಿ. ನೀರು ದ್ರವ ಸ್ಥಿತಿಯಿಂದಅನಿಲ ಸ್ಥಿತಿಗೆ ಬರುವುದನ್ನುಆವೀಕರಣ ಎನ್ನುತ್ತಾರೆ.

ಮಾಡಿ-ನೋಡು
ಒಂದು ಸಣ್ಣ ಪ್ಲಾಸ್ಟಿಕ್ ಚೀಲವನ್ನು ತೆಗೆದುಕೋ. ಅದರಲ್ಲಿ ಸ್ವಲ್ಪ ನೀರು ಹಾಕಿ ಅದರ ತುದಿಯನ್ನು ದಾರದಿಂದ ಕಟ್ಟು. ಚೀಲವನ್ನು ಬಿಸಿಲಿನಲ್ಲಿ ಇಡು. ಒಂದೆರಡು ಗಂಟೆಗಳ ನಂತರ ಗಮನಿಸು.

ಓದಿ-ತಿಳಿ :
ಸೂರ್ಯನ ಶಾಖದಿಂದ ನೀರು ಕಾದು ಆವಿಯಾಗಿ ಮೇಲೆ ಹೋಗುತ್ತದೆ. ನೀರಾವಿಗೆ ತಂಪು ಗಾಳಿ ತಗುಲಿದಾಗ ನೀರ ಹನಿಗಳಾಗುತ್ತದೆ. ಹೀಗೆ ನೀರಾವಿ ತಂಪಾಗಿ ದ್ರವಸ್ಥಿತಿಗೆ ಬದಲಾಗುವುದನ್ನು ಸಾಂದ್ರೀಕರಣ ಎನ್ನುವರು.

ಸಾಂದ್ರೀಕರ

ಓದಿ-ತಿಳಿ :
ಮಳೆಯ ಹನಿಗಳು ಹೆಚ್ಚು ತಂಪಾದಾಗ ಮಂಜುಗಡ್ಡೆಯ ಸಣ್ಣ ಗೋಲಗಳಾಗಿ ಭೂಮಿಗೆ ಬೀಳುತ್ತವೆ. ಇವೇ ಆಲಿಕಲ್ಲುಗಳು.

ಆಲಿಕಲ್ಲುಗಳು

ಓದಿ-ತಿಳಿ
ಜೀವಿಗಳ ದಿನನಿತ್ಯದ ಕೆಲಸಗಳಿಗಲ್ಲದೆ ಬೇಸಾಯಕ್ಕೆ, ಕಾರ್ಖಾನೆಗಳಿಗೆ, ಜಲಸಾರಿಗೆಗೆ, ಕಟ್ಟಡ ನಿರ್ಮಾಣದ ಕೆಲಸಗಳಿಗೆ, ವಿದ್ಯುತ್ ಉತ್ಪಾದನೆಗೆ ನೀರು ಅತಿ ಅಗತ್ಯ.

ಓದಿ-ತಿಳಿ
ನಿನಗಿಷ್ಟೇ

ನೀರು ಭೂಮಿಯಲ್ಲಿ ನೀರಿನ ಪ್ರಮಾಣ 100 ಚಮಚ ಇದೆಯೆಂದು ತಿಳಿದುಕೊ. ಅದರಲ್ಲಿ 97ಕ್ಕಿಂತ ಹೆಚ್ಚು ಚಮಚ ಉಪ್ಪು ನೀರು. 2 ಚಮಚದಷ್ಟು ನೀರು ಮಂಜುಗಡ್ಡೆಯಾಗಿದೆ. 1 ಚಮಚಕ್ಕಿಂತ ಕಡಿಮೆ ನೀರು ಮಾತ್ರ ದಿನನಿತ್ಯದ ಕೆಲಸಗಳಿಗೆ ಬಳಸಲಷ್ಟೇ ಸಾಧ್ಯ.

ಓದಿ-ತಿಳಿ
ಪಾತ್ರೆ, ಬಟ್ಟೆ ಮತ್ತು ತರಕಾರಿಗಳನ್ನು ತೊಳೆದ ನೀರನ್ನು ಗಿಡಗಳಿಗೆ ಹಾಯಿಸುವ ಮೂಲಕ ಒಮ್ಮೆ ಬಳಸಿದ ನೀರನ್ನು ಮತ್ತೆ ಬಳಸಬಹುದು. ನೀರಿನ ಮರುಬಳಕೆಯಿಂದ ನೀರನ್ನು ಉಳಿಸಬಹುದು.

ನಿನಗಿದು ಗೊತ್ತೆ?

* ಜಲ ಸಂಪನ್ಮೂಲದಲ್ಲಿ ಭಾರತ ಪ್ರಪಂಚದಲ್ಲೇ ಅತೀ ಶ್ರೀಮಂತ ರಾಷ್ಟ್ರ.
* ಭೂಮಿಯಲ್ಲಿ ದೊರೆಯುವ ಸಿಹಿನೀರಿನ ಹೆಚ್ಚಿನ ಭಾಗ ಮಂಜುಗಡ್ಡೆಯಾಗಿರುತ್ತದೆ.
* ನೀರು ಗಾಳಿಯಲ್ಲಿ ಆವಿಯ ರೂಪದಲ್ಲಿದೆ.
* ಜಲಾಶಯಗಳ ನೀರನ್ನು ಶುದ್ಧೀಕರಿಸಲು ಮೀನು ಸಾಕುತ್ತಾರೆ.
* ನೀರು ಸಸ್ಯ ಮತ್ತು ಪ್ರಾಣಿಗಳ ದೇಹದ ಆಕಾರವನ್ನು ಕಾಯ್ದುಕೊಳ್ಳುತ್ತದೆ.
* ಮಾನವರ ಶರೀರದಲ್ಲಿ ಸುಮಾರು ಶೇಕಡ 65 ಭಾಗ ನೀರಿದೆ. ಇತರ ಜೀವಿಗಳಲ್ಲಿ ಶೇಕಡ 40 ರಿಂದ 90 ಭಾಗ ನೀರಿದೆ, ಎಲೆಗಳಲ್ಲಿ ಶೇಕಡ 80ಕ್ಕೂ ಹೆಚ್ಚಿನ ಭಾಗ ನೀರಿದೆ.
* ನಾವು ದಿನಕ್ಕೆ ಎರಡು ಲೀಟರ್‍ಗಳಷ್ಟಾದರೂ ನೀರನ್ನು ಕುಡಿಯಬೇಕು.
* ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮೇಘಾಲಯ ರಾಜ್ಯದ ಮೌಸಿನ್ ರಾಮ್.
* ಕರ್ನಾಟಕದ ಆಗುಂಬೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಭೂಮಿಯಲ್ಲಿ ದೊರೆಯುವ ಸಿಹಿನೀರಿನ ಹೆಚ್ಚಿನ ಭಾಗ ಮಂಜುಗಡ್ಡೆಯಾಗಿರುತ್ತದೆ.
ನೀರು ಗಾಳಿಯಲ್ಲಿ ಆವಿಯ ರೂಪದಲ್ಲಿದೆ.
ಮೇಘಾಲಯ ರಾಜ್ಯದ ಮೌಸಿನ್ ರಾಮ್
ಕರ್ನಾಟಕದ ಆಗುಂಬೆಯಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಸಂವೇದ ವಿಡಿಯೋ ಪಾಠಗಳು

Samveda 4th EVS Hanigoodidare part 1of 1 – 4 KM EVS

ಪೂರಕ ವಿಡಿಯೋಗಳು

ಹನಿಗೂಡಿದರೆ | Hanigudidare | 4th standard EVS | lesson 6 | EVS | EACH DROP EVS |
ಹನಿಗೂಡಿದರೆ | Hanigudidare | 4th standard EVS | lesson 6 | EVS | EACH DROP EVS | 2
ಹನಿಗೂಡಿದರೆ | Hanigudidare | 4th standard EVS | lesson 6 | EVS | EACH DROP EVS 
ಹನಿಗೂಡಿದರೆ | Hanigudidare | 4th standard EVS | lesson 6 | EVS | EACH DROP EVS |

ಪ್ರಶ್ನೋತ್ತರಗಳು

ಈ ಪಾಠದ ಪ್ರಶ್ನೋತ್ತರಗಳಿಗಾಗಿ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೆಚ್ಚಿನ ಜ್ಞಾನಕ್ಕಾಗಿ ವಿಡಿಯೋಗಳು

ಜಲಚಕ್ರ
ಆವೀಕರಣ
Evaporation and Condensation- Science
ಭೂಮಿಯಲ್ಲಿರುವ ಒಟ್ಟು ನೀರು