ನಮ್ಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಕು. ಜಗನ್ನಾಥ ಉಮೇಶ ಗೌಡ, ಹುಲ್ಕುತ್ರಿ ಈತ ಯಕ್ಷಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಉದಯೋನ್ಮುಖ ಪ್ರತಿಭೆ. ಇಲ್ಲಿಯ ‘ಯಕ್ಷ ದಕ್ಷ ಯಕ್ಷಗಾನ ಸಂಸ್ಥೆ, ಹೆಮ್ಮನಬೈಲ್’ ನಲ್ಲಿ ತರಬೇತಿ ಪಡೆದು 09-01-2023ರಂದು ನಡೆದ ರಂಗಪ್ರವೇಶದಲ್ಲಿ “ದೇವಿ ಮಹಾತ್ಮೇ” ಕಥಾಭಾಗದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದಾನೆ. ಅದ್ಭುತ ಹಾವಭಾವ, ತಾಳಕ್ಕೆ ತಕ್ಕ ನೃತ್ಯ ಇವೆಲ್ಲವೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದ್ದಾನೆ. ಈತನ ಅಭಿನಯಕ್ಕೆ ಮನಸೋಲದವರಿಲ್ಲ. ಯಕ್ಷಲೋಕಕ್ಕೆ ಅತ್ಯುತ್ತಮ ಕಲೆಗಾರನಾಗಲಿ ಎಂಬುದು ನಮ್ಮೆಲ್ಲರ ಬಯಕೆ.

ವಿಡಿಯೋ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ